Thursday, April 18, 2024
spot_img
More

    Latest Posts

    ಗ್ರಾ. ಪಂ ಸದಸ್ಯನಿಗೆ ಪಿಎಸ್ಐ ಕಪಾಳ ಮೋಕ್ಷ ; ಸಿಟ್ಟಿಗೆದ್ದ ಗ್ರಾಮಸ್ಥರು

    ತುಮಕೂರು: ಕುಣಿಗಲ್ ಪೊಲೀಸ್ ಠಾಣೆ ಪಿಎಸ್​ಐ, ಬೇಗೂರು ಗ್ರಾಮ ಪಂಚಾಯತ್​ ಸದಸ್ಯನಿಗೆ ಕಪಾಳ ಮೋಕ್ಷ ಮಾಡಿರುವ ಆರೋಪ ಕೇಳಿಬಂದಿದೆ.

    ಬೇಗೂರಿನ ನಾರಾಯಣ್ ಎನ್ನುವವರನ್ನು ಪೊಲೀಸರು ಕುಣಿಗಲ್ ಠಾಣೆಗೆ ಕರೆದುಕೊಂಡು ಹೋಗಿದ್ದರು. ಈ ಬಗ್ಗೆ ವಿಚಾರಿಸಲು ಬೇಗೂರು ಗ್ರಾಮ ಪಂಚಾಯತ್​ ಸದಸ್ಯ ನಾಗಾನಂದ್ ಠಾಣೆಗೆ ತೆರಳಿದ್ದರು. ಈ ವೇಳೆ ಅನುಮತಿ‌‌ ಇಲ್ಲದೆ ಒಳಗೆ ಹೇಗೆ ಪ್ರವೇಶಿಸಿದೆ ಎಂದು ಸಿಟ್ಟಿಗೆದ್ದ ಪಿಎಸ್​ಐ ಲಕ್ಷ್ಮಣ್, ಏಕವಚನದಲ್ಲಿ ನಿಂದಿಸಿ ಕಪಾಳಮೋಕ್ಷ ಮಾಡಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬೇಗೂರು ಗ್ರಾಮಸ್ಥರು ಕುಣಿಗಲ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದು, ಕೂಡಲೇ ಪಿಎಸ್ಐ ಲಕ್ಷ್ಮಣ್​ ಅಮಾನತು ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss