ಉತ್ತರ ಪ್ರದೇಶ: 10 ವರ್ಷದ ಬಾಲಕನನ್ನು ಮಾಂತ್ರಿಕನೊಬ್ಬ ನರಬಲಿ ಕೊಡುವಂತೆ ಹೇಳಿ ಕೊಂದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಪರ್ಸಾ ಗ್ರಾಮದ ನಿವಾಸಿ ಕೃಷ್ಣ ವರ್ಮಾ ಅವರ ಪುತ್ರ ವಿವೇಕ್ ಗುರುವಾರ ರಾತ್ರಿ ನಾಪತ್ತೆಯಾಗಿದ್ದ.
ಅದೇ ದಿನ ರಾತ್ರಿ ಗದ್ದೆಯಲ್ಲಿ ಮಗುವಿನ ಕತ್ತು ಸೀಳಿದ ರೀತಿಯಲ್ಲಿ ಪತ್ತೆಯಾಗಿಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮೃತ ಮಗುವಿನ ಸೋದರ ಸಂಬಂಧಿ ಅನೂಪ್ಗೆ ಎರಡೂವರೆ ವರ್ಷದ ಮಗನಿದ್ದು, ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದ. ಎಷ್ಟೇ ಚಿಕಿತ್ಸೆ ನೀಡಿದರೂ ಸಕಾರಾತ್ಮಕ ಫಲಿತಾಂಶ ಸಿಗದಿದ್ದಾಗ, ಅನೂಪ್ ತನ್ನ ಹಳ್ಳಿಯ ಸಮೀಪವಿರುವ ಮಾಂತ್ರಿಕನೊಬ್ಬಬ್ಬನನ್ನು ಸಂಪರ್ಕಿಸಿದನು.
ಇದಕ್ಕೆಲ್ಲ ಪರಿಹಾರ ನರಬಲಿ ಎಂದು ನಿಗೂಢವಾದಿ ಮಾಂತ್ರಿಕ ಅನೂಪ್ನನ್ನು ನರಬಲಿ ಮಾಡಲು ಪ್ರೇರೇಪಿಸಿದ್ದಾನೆ. ಅನೂಪ್ ತನ್ನ ಚಿಕ್ಕಪ್ಪ ಚಿಂತಾರಾಮ್ ಜೊತೆಗೂಡಿ ವಿವೇಕ್ನನ್ನು ಗುದ್ದಲಿಯಿಂದ ಕೊಂದಿದ್ದಾನೆ.
ಇದೀಗ ಮೂರು ಆರೋಪಿಗಳಾದ ಅನೂಪ್, ಚಿಂತಾರಾಮ್ ಮತ್ತು ಮಾಂತ್ರಿಕನನ್ನು ಶನಿವಾರ ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.