ಕುಂಬಳೆ: ವಿವಾನ್ ಪ್ರೊಡಕ್ಷನ್ನ ವತಿಯಿಂದ ತಯಾರಾಗುತ್ತಿರುವ “ಐಸಬಾಸ್” ಎಂಬ ತುಳು ವಿಭಿನ್ನ ಅಲ್ಬಂನ ಪೋಸ್ಟರನ್ನು ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ಚಾವಡಿಯಲ್ಲಿ ಬಿಡುಗಡೆಗೊಳಿಸಲಾಯಿತು. ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್ ಸಾರ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜೆಪ್ಪು, ತುಳು ಸಂಘಟಕ ರೋಶನ್ ರೆನೋಲ್ಡ್, ಅನಿಂದಿತ್ ಗೌಡ ಕೊಚ್ಚಿ ಬಾರಿಕೆ, ಸಮಾಜರತ್ನ ಡಾ. ಶ್ರೀ ಕೃಷ್ಣಪ್ಪ ಗೌಡ ಪಡ್ಡಂಬೈಲು, ಲೇಖಕರು ಶ್ರೀ ವಿಶ್ವನಾಥ ಕೋಟೆಕಾರ್, ನಿರ್ಮಾಪಕಿ ವಿದ್ಯಾ ವೇಣುಗೋಪಾಲ ಆಚಾರ್ಯ,ನಿರ್ದೇಶಕ ಚೇತನ್ ಕೆ. ವಿಟ್ಲ,ಸಂಜು ಮೈಸೂರ್ ಮೊದಲಾದವರು ಉಪಸ್ಥಿತರಿದ್ದರು.

ಅಂತರಾಷ್ಟ್ರೀಯ ಮಟ್ಟದ ಖ್ಯಾತ ಚಿತ್ರ ಕಲಾವಿದ ದಿ.ಎಂಜಿಕೆ ಆಚಾರ್ಯ ಅವರ ಕನಸಿನ ಕೂಸಾದ ಟೀಮ್ ಎಂಜಿಕೆ ಶಿಲ್ಪಕಲಾ ಕುಂಬಳೆ ಇವರ ಕಲಾತ್ಮಕ ನಿದೇಶನದಲ್ಲಿ ಐಸಬಾತ್ ಮೂಡಿ ಬರಲಿದೆ. ಭವಾನಿ ಶಂಕರ್ ಗಾಯನ,ಬಾತು ಕುಲಾಲ್ ಡಿಒಪಿ ಹಾಗೂ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಆಶ್ವಿನ್ ಬಾಬಣ್ಣ ಪುತ್ತೂರು ಮಾಸ್ಟರಿಂಗ್ ನಡೆಸಿದ ಐಸಬಾತ್ ನಲ್ಲಿ ವೇಣುಗೋಪಾಲ ಆಚಾರ್ಯ, ಸುನಿಲ್ ಕುಮಾರ್, ಲಿಂಗಪ್ಪ ಕುಬಣೂರು, ಚರಣ್ ಮುಳ್ಳೇರಿಯ,ಸಂಜು ಮೈಸೂರು,ಅಚಲ್ ವಿಟ್ಲ,ಬಾಭು ಬದಿಯಡ್ಕ,ಚೇತನ್ ಕೆ. ವಿಟ್ಲ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಜ್ಜೆ ಡಿಸೈನ್ಸ್ ನ ಶಶಿ ಆಚಾರ್ ಕನ್ಯಾನ ಪ್ರಚಾರ ವಿನ್ಯಾಸ ನಿರ್ವಹಿಸಿದ್ದಾರೆ. ಇದರ ಶೀರ್ಷೀಕೆಯನ್ನು ಖ್ಯಾತ ರಂಗ ನಿರ್ದೇಶಕ ಜೀವನ್ ರಾಮ್ ಸುಳ್ಯ ಬಿಡುಗಡೆ ಮಾಡಿದ್ದರು.
