Saturday, April 20, 2024
spot_img
More

    Latest Posts

    ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ : ಇನಾಂ ಜಮೀನು ಮರು ಮಂಜೂರಾತಿಗಾಗಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

    ಬೆಂಗಳೂರು: ರಾಜ್ಯದ ಬಹುತೇಕ ರೈತರು, ಇನಾಂ ಜಮೀನು ಪಡೆಯೋ ನಿರೀಕ್ಷೆಯಲ್ಲಿದ್ದಾರೆ. ಇವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿರುವಂತ ರಾಜ್ಯ ಸರ್ಕಾರವು, ಇನಾಂ ಜಮೀನು ಮರು ಮಂಜೂರಾತಿಗಾಗಿ ಅರ್ಜಿ ಸಲ್ಲಿಕೆ ಅವಧಿಯನ್ನು ದಿನಾಂಕ 18-01-2023ರವರೆಗೆ ವಿಸ್ತರಿಸಿದೆ.

    ಈ ಬಗ್ಗೆ ಕಂದಾಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ರೈತರು ಇನಾಂ ಜಮೀನು ರೀ-ಗ್ರಾಂಟ್ ಗಾಗಿ ಅರ್ಜಿಯನ್ನು ಸಲ್ಲಿಸೋದಕ್ಕೆ ಆಹ್ವಾನಿಸಲಾಗಿದೆ. ಅಲ್ಲದೇ ಇನಾಂ ಜಮೀನು ರದ್ದಿಗಾಗಿಯೂ, ಮರು ಮಂಜೂರಾತಿಗಾಗಿಯೂ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದೆ. ಇನ್ನೂ ಇನಾಂ ಜಮೀನು ಮರು ಮಂಜೂರಾತಿ, ರದ್ದತಿಗಾಗಿ ಅರ್ಜಿಯನ್ನು ರೈತರು, ಧಾರ್ಮಿಕ ಸಂಸ್ಥೆಗೆ ಸೇರಿದ ಇನಾಂ ಜಮೀನುದಾರರು ದಿನಾಂಕ 18-01-2023ರ ಒಳಗಾಗಿ ಅರ್ಜಿ ಸಲ್ಲಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss