ಮಂಗಳೂರು: ಕರಾವಳಿಯಲ್ಲಿ ಕಂಬಳ ಕಲರವ ಜೋರಾಗಿದೆ ಜಿಲ್ಲೆಯ ಅತೀ ವೈಭವೋಪೇತ ಕಂಬಳ ಎಂದೇ ಪ್ರಸಿದ್ಧಿಯಾಗಿರುವ ಐಕಳ ಕಾಂತಭಾರೆ-ಬೂದಭಾರೆ ಜೋಡುಕರೆ ಕಂಬಳ ನಡೆದಿದೆ..46 ನೇ ವರ್ಷದ ಜೋಡುಕರೆ ಕಂಬಳ ಇದಾಗಿದ್ದು,ಬ್ರಿಟಿಷ್ ಕಾಲದಿಂದಲೂ ಇಲ್ಲಿ ಕಂಬಳ ನಡೆಯುತಿತ್ತು ಅನ್ನೋದು ವಿಶೇಷವಾಗಿದೆ.
ಐಕಳ ಕಂಬಳ ಕೇವಲ ಕಂಬಳವಾಗಿ ಮಾತ್ರ ಉಳಿಯದೇ ತುಳುನಾಡಿನ ಜಾನಪದ ನಾಡು-ನುಡಿಯನ್ನು ಬೆಳೆಸುವ ಐಕಳೋತ್ಸವವಾಗಿ ಮೇಳೈಸಿದೆ..ಸುಮಾರು 230ಕ್ಕೂಅಧಿಕ ಜೊತೆ ಕೋಣಗಳು ಈ ಐಕಳ ಕಂಬಳದಲ್ಲಿ ಭಾಗವಹಿಸಿದ್ದು,ಸಾವಿರಾರು ಕಂಬಳಾಭಿಮಾನಿಗಳು ಕಂಬಳ ವೈಭವಕ್ಕೆ ಸಾಕ್ಷಿಯಾಗಿದ್ದಾರೆ..ಐಕಳ ಕಂಬಳದ ಪ್ರಯುಕ್ತ ಸಹಕಾರಿ ಧುರೀಣ ಎಂ.ಎನ್ ರಾಜೇಂದ್ರ ಕುಮಾರ್,ಪದ್ಮಶ್ರೀ ವಿಜೇತರಾದ ಹರೇಕಳ ಹಾಜಬ್ಬ,ಅಮೈ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಲಾಗಿದೆ..ಆಕರ್ಷಕ ವಿದ್ಯುತ್ ದೀಪಾಲಂಕರದ ನಡುವೆ ನಡೆದ ಐಕಳ ಕಂಬಳ ಪ್ರತಿವರ್ಷದಂತೇ ಈ ಬಾರಿಯೂ ಜನರ ಮನಸೂರೆಗೊಳಿಸಿದೆ