Friday, April 19, 2024
spot_img
More

    Latest Posts

    ಮಂಗಳೂರು: ಪರೀಕ್ಷೆ ಬರೆಯಲು ತೆರಳಿದ್ದ ಬಿಕಾಂ ವಿದ್ಯಾರ್ಥಿಗೆ ಹೃದಯಾಘಾತ- ಸಾವು

    ಬಿಕಾಂ ಪರೀಕ್ಷೆ ಬರೆಯಲೆಂದು ತನ್ನ ಮನೆಯಿಂದ ತೆರಳಿದ್ದ ಬಿಕಾಂ ವಿದ್ಯಾರ್ಥಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ ದಾರುಣ ಘಟನೆ ಏ.17 ರ ಶನಿವಾರ ನಡೆದಿದೆ.

    ಮೃತ ವಿದ್ಯಾರ್ಥಿಯನ್ನು ಸುಳ್ಯದ ಅಜ್ಜಾವರದ ಇರುವಂಬಳ್ಳ ಹಸೈನಾರ್ ಅವರ ಪುತ್ರ ಸಿನಾನ್ (20) ಎಂದು ಗುರುತಿಸಲಾಗಿದೆ. ಸಿನಾನ್ ತನ್ನ ಪದವಿ ಶಿಕ್ಷಣದ ಜತೆಯಲ್ಲೇ ಕುಂಬ್ರದ ಕಾಲೇಜೊಂದರಲ್ಲಿ ಧಾರ್ಮಿಕ ಶಿಕ್ಷಣವನ್ನು ಅಧ್ಯಯನ ಮಾಡುತ್ತಿದ್ದ.ಮಂಗಳೂರಿನಲ್ಲಿ ಶನಿವಾರ ನಡೆಯಬೇಕಾಗಿದ್ದ ಬಿಕಾಂ ಪದವಿಗೆ ಸಂಬಂಧಿಸಿದ ಪರೀಕ್ಷೆಗೆ ತಯಾರಿ ನಡೆಸಿ , ಪರೀಕ್ಷೆ ಎದುರಿಸಲೆಂದು ಶುಕ್ರವಾರ ಸಿನಾನ್ ಪಾಣೆಮಂಗಳೂರು ನಂದಾವರದಲ್ಲಿರುವ ತನ್ನ ಸಂಬಂಧಿಕರ ಮನೆಗೆ ತೆರಳಿ ಉಳಿದುಕೊಂಡಿದ್ದ. ಇಂದು ಬೆಳಗ್ಗೆ ಪರೀಕ್ಷೆಗೆ ಹೊರಡುವ ತಯಾರಿಯಲ್ಲಿದ್ದಾಗ ಸಿನಾನ್ ಗೆ ಇಂದು ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾನೆಂದು ತಿಳಿದು ಬಂದಿದೆ

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss