ಸಕಲೇಶಪುರ: ಗಣೇಶ ವಿಸರ್ಜನೆ ವೇಳೆ ಪಿಎಸ್ಐಯನ್ನು ಯುವಕರ ಗುಂಪೊಂದು ಎಳೆದಾಡಿದೆ. ಈ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದ್ದು ಅದರ ವೀಡಿಯೊ ವೈರಲ್ ಆಗುತ್ತಿದೆ.
ಕೋವಿಡ್ ನಿಯಮ ಉಲ್ಲಂಘಿಸಿ ಮೆರವಣಿಗೆ ಮಾಡಿದ್ದಲ್ಲದೇ ಡಿಜೆ ಹಚ್ಚಿದ ಯುವಕರು ಡ್ಯಾನ್ಸ್ ಮಾಡುತ್ತ ಮೆರವಣಿಗೆಯಲ್ಲಿ ತೆರಳುತ್ತಿದ್ದರು. ಸ್ಥಳಕ್ಕೆ ಬಂದ ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿ ಡಿಜೆ ಬಂದ್ ಮಾಡುವಂತೆ ಹೇಳಿದ್ದಾರೆ. ಈ ವೇಳೆ ಗುಂಪಿನಲ್ಲಿ ಬಂದ ಸಬ್ ಇನ್ಸ್ಪೆಕ್ಟರ್ಅನ್ನು ಯುವಕರು ತಳ್ಳಾಡಿದ್ದಾರೆ. ಈ ವಿಚಾರವಾಗಿ ಇನ್ನೂ ಕೂಡ ದೂರು ದಾಖಲಾಗಿಲ್ಲ.