Friday, April 26, 2024
spot_img
More

    Latest Posts

    ಬಿಜೆಪಿ ಮಾಜಿ ರಾಜ್ಯಸಭಾ ಎಂಪಿ, ಹಿರಿಯ ಪತ್ರಕರ್ತ ಚಂದನ್​ ಮಿತ್ರಾ ನಿಧನ

    ಬಿಜೆಪಿ ಮಾಜಿ ರಾಜ್ಯಸಭಾ ಸದಸ್ಯ, ಹಿರಿಯ ಪತ್ರಕರ್ತ ಚಂದನ್​ ಮಿತ್ರಾ (66) ನಿನ್ನೆ ತಡರಾತ್ರಿ ನಿಧನರಾದರು. ತಂದೆಯ ನಿಧನದ ಬಗ್ಗೆ ಅವರ ಪುತ್ರ ಕುಶನ್​ ಮಿತ್ರಾ ಎಎನ್​ಐಗೆ ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದಲೂ ಅವರಿಗೆ ಅಸೌಖ್ಯವಿತ್ತು ಎಂದು ತಿಳಿಸಿದ್ದಾರೆ. ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಚಂದನ್​ ಮಿತ್ರ ನಂತರ ಆ ಹುದ್ದೆಯನ್ನು ತೊರೆದಿದ್ದರು. 2018ರಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದ್ದರು ಎಂದೂ ಹೇಳಲಾಗಿದೆ. ಹಾಗೇ, ಈ ವರ್ಷ ಜೂನ್​ನಲ್ಲಿ ಪತ್ರಕರ್ತ ಹುದ್ದೆಯನ್ನೂ ಬಿಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.  

    ಚಂದನ್​ಮಿತ್ರಾ ಮೂಲತಃ ಪಶ್ಚಿಮ ಬಂಗಾಳದ ಹೌರಾಹ್​​ನವರು. ದೆಹಲಿಯ ಪತ್ರಿಕೆಯೊಂದರ ಸಂಪಾದಕರಾಗಿದ್ದರು. ಬಿಜೆಪಿ ಪಕ್ಷದ ರಾಜ್ಯಸಭಾ ಸದಸ್ಯರಾಗಿ 2010ರಲ್ಲಿ ಮಧ್ಯಪ್ರದೇಶದಿಂದ ಆಯ್ಕೆಯಾಗಿದ್ದರು.  2016ರವರೆಗೆ ರಾಜ್ಯಸಭಾ ಎಂಪಿಯಾಗಿ ಮುಂದುವರಿದು ನಂತರ ಬಿಜೆಪಿಯನ್ನೇ ತೊರೆದಿದ್ದರು. 2018ರಲ್ಲಿ ಟಿಎಂಸಿ ಸೇರ್ಪಡೆಯಾಗಿದ್ದರು.

    ಪ್ರಧಾನಿ ಮೋದಿ ಸಂತಾಪ
    ಚಂದನ್​ ಮಿತ್ರಾ, ಅಪರ ಬುದ್ಧಿ ಶಕ್ತಿ ಮತ್ತು ಒಳನೋಟ ಹೊಂದಿದ್ದವರು. ಮಾಧ್ಯಮ ಮತ್ತು ರಾಜಕೀಯ ಜೀವನದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಅವರ ನಿಧನದಿಂದ ತುಂಬ ನೋವಾಗಿದೆ. ಓಂ ಶಾಮತಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

    ಬಿಜೆಪಿ ರಾಜ್ಯಸಭಾ ಸದಸ್ಯ ಸ್ವಪನ್​ ದಾಸ್​ ಗುಪ್ತಾ ಟ್ವೀಟ್​ ಮೂಲಕ ಚಂದನ್​ ಮಿತ್ರಾರಿಗೆ ಸಂತಾಪ ಸೂಚಿಸಿದ್ದಾರೆ. 1972ರಲ್ಲಿ ತಾವಿಬ್ಬರೂ ಒಟ್ಟಿಗೇ ಶಾಲಾ ಪ್ರವಾಸಕ್ಕೆ ಹೋಗಿದ್ದ ಫೋಟೋ ಶೇರ್​ ಮಾಡಿಕೊಂಡಿರುವ ಅವರು, ನಾನು ನನ್ನ ಆಪ್ತಮಿತ್ರನನ್ನು ಕಳೆದುಕೊಂಡಿದ್ದೇನೆ. ನಾವಿಬ್ಬರೂ ಶಾಲಾದಿನಗಳಿಂದಲೂ ಒಟ್ಟಿಗೇ ಇದ್ದವು. ಒಟ್ಟಿಗೇ ಪತ್ರಿಕೋದ್ಯಮಕ್ಕೆ ಕಾಲಿಟ್ಟೆವು. ಈಗ ಚಂದನ್​ ಇಲ್ಲ..ಅವರು ಎಲ್ಲೇ ಇದ್ದರೂ, ಅಲ್ಲೇ ಖುಷಿಯಾಗಿರಲಿ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss