Friday, March 29, 2024
spot_img
More

    Latest Posts

    ಆಯತಪ್ಪಿ ದೋಣಿಯಿಂದ ನದಿಗೆ ಬಿದ್ದು ಮೀನುಗಾರ ಸಾವು

    ಉಡುಪಿ: ಸಮೀಪದ ಕಲ್ಯಾಣಪುರ ಸಂತೆಕಟ್ಟೆಯ ಕಡುವಿನಬಾಗಿಲು ಎಂಬಲ್ಲಿ ಮೀನುಗಾರನೋರ್ವ ದೋಣಿಯಿಂದ ನದಿಗೆ ಬಿದ್ದು ಮೃತಪಟ್ಟಿದ್ದಾರೆ.

    ಮೃತರನ್ನು 32ವರ್ಷದ ಶಿವರಾಜ್ ಎಂದು ಗುರುತಿಸಲಾಗಿದೆ.  ಇವರು ಎಂದಿನಂತೆ ಇಲ್ಲಿನ ಸ್ವರ್ಣಾ ನದಿಗೆ ಮೀನುಗಾರಿಕೆ ನಡೆಸಲು ತೆರಳಿದ್ದರು. ಮೀನುಗಾರಿಕೆ ನಡೆಸುವ ವೇಳೆ ಆಕಸ್ಮಿಕವಾಗಿ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ.

    ತಕ್ಷಣ ಅಗ್ನಿಶಾಮಕ ದಳ ಮತ್ತು ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಶೋಧ ಕಾರ್ಯ ನಡೆಸಿದರೂ ಮೃತದೇಹ ಸಿಕ್ಕಿರಲಿಲ್ಲ. ಕೊನೆಗೆ ಸ್ವರ್ಣ ನದಿಯಲ್ಲಿ ಶಿವರಾಜ್ ಮೃತದೇಹ ಸಿಕ್ಕಿದ್ದು, ಅದನ್ನು ಮೇಲಕ್ಕೆತ್ತಲಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss