ಬೆಂಗಳೂರು:ಇಲ್ಲಿಯ ಬಾಗ್ಮನೆ ಟೆಕ್ ಪಾರ್ಕ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಈ ವೇಳೆ ಅಗ್ನಿ ಶಾಮಕ ದಳದ ಸಿಬ್ಬಿಂದ್ದಿ ಆಯ ತಪ್ಪಿ ಕೆಳಗೆ ಬಿದ್ದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಮಹದೇವಪುರ ಅಗ್ನಿಶಾಮಕದ ದಳದ ಫೈರ್ ಮ್ಯಾನ್ ವಿನಯ್ ಆಯ ತಪ್ಪಿ ಕೆಳೆಗೆ ಬಿದ್ದ ಸಿಬ್ಬಂದಿ. ಮೇಲಿಂದ ಕೆಳಗೆ ಬಿದ್ದ ರಭಸಕ್ಕೆ ವಿಯನ್ ಕಾಲು ಹಾಗೂ ತಲೆಗೆ ಪೆಟ್ಟು ಬಿದ್ದಿದೆ.ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯಕ್ಕೆ ವಿನಯ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾರತಹಳ್ಳಿಯ ಕಾರ್ತಿಕ್ ನಗರದಲ್ಲಿರೋ ಬಾಗಮನಿ ಟೆಕ್ ಪಾರ್ಕ್ನ ಲೊಗ್ಯಾಟೋ ಕಂಪನಿಯಲ್ಲಿ ಶಾರ್ಟ್ ಸರ್ಕೀಟ್ ನಿಂದ ಅಗ್ನಿ ಅವಘಡ ಸಂಭವಿಸಿದೆ. ಇದನ್ನ ನಂದಿಸೋ ಸಮಯದಲ್ಲಿಯೇ ಫೈರ್ ಮ್ಯಾನ್ ವಿನಯ್ ಆಯ ತಪ್ಪಿ ಕೆಳಗೆ ಬಿದ್ದಾರೆ.
ಆದರೂ ಅಗ್ನಿ ನಂದಿಸುವಲ್ಲಿ ಸಿಬ್ಬಂದಿ ಯಶಸ್ವಿ ಆಗಿದ್ದಾರೆ. ಯಾವುದೇ ಸಾವು-ನೋವು ಸಂಭವಿಸಿರೋ ಬಗ್ಗೆ ವರದಿ ಆಗಿಲ್ಲ.