ಮಂಗಳೂರು: ನಗರದ ಕಸಬಾ ಬೆಂಗ್ರೆಯಲ್ಲಿ ಸಂಭವಿಸಿರುವ ಅಗ್ನಿ ಅವಘಡದಲ್ಲಿ ಲಕ್ಷದ್ವೀಪಕ್ಕೆ ಸರಕು ಸಾಗಾಟ ಮಾಡುತ್ತಿದ್ದ ಮೂರು ಬೋಟ್ಗಳು ಸುಟ್ಟು ಕರಕಲಾಗಿವೆ. ಈ ಅವಘಡದಲ್ಲಿ ಸುಮಾರು 2.50 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ದುರಸ್ತಿಗೆಂದು ನಿಲ್ಲಿಸಿದ್ದ ಈ ಬೋಟ್ಗಳಲ್ಲಿ ಒಂದು ಬೋಟ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ ಪರಿಣಾಮ ಪಕ್ಕದಲ್ಲಿದ್ದ ಇತರ ಎರಡು ಬೋಟ್ಗಳಲ್ಲಿ ಬೆಂಕಿ ಆವರಿಸಿತ್ತು. ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿ ವರ್ಗ ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿತ್ತು.
ಈ ದುರ್ಘಟನೆಯಿಂದ ಮುಹಮ್ಮದ್ ರಫೀಕ್ ಎಂಬುವರ ಮನೆ ಹಾಗೂ ಅಬ್ದುಲ್ ಸಮದ್ ಎಂಬುವರಿಗೆ ಸೇರಿದ ಒಣಮೀನು ದಾಸ್ತಾನಿಡುವ ಶೆಡ್ಗೂ ಹಾನಿಯಾಗಿತ್ತು. ಪರಿಣಾಮ ಒಟ್ಟು 2.50 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹಡಗು ರಿಪೇರಿ ಯಾರ್ಡ್ನ ವಾಚ್ಮ್ಯಾನ್ ಮುಹಮ್ಮದ್ ಶರೀಫ್ ಪಣಂಬೂರು ಪೊಲೀಸರಿಗೆ ದೂರು ನೀಡಿದ್ದಾರೆ.