ಉಡುಪಿ: ಗಾಯತ್ರಿ ಮಹಿಳಾ ಮಂಡಳಿ,ಮಂಜರಪಲ್ಕೆ ಇವರ ವತಿಯಿಂದ ʼದೀಪ ಪೂಜೆʼ ಕಾರ್ಯಕ್ರಮ ಫೆ.22ರಂದು ಮಂಜರಪಲ್ಕೆ ಶಿಲ್ಪ ಶ್ರೀ ಸಭಾಭವನದಲ್ಲಿ ನಡೆಯಿತು.
ಉಡುಪಿ ಧಾರ್ಮಿಕ ಮಾರ್ಗದರ್ಶಕರಾದ ಸಂತೋಷ್ ಆಚಾರ್ಯ ಇವರು ಕಾರ್ಯಕ್ರಮಕ್ಕೆ ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಿದರು.
ಶ್ರೀ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಇವರ ಮಾರ್ಗದರ್ಶನದಲ್ಲಿ ʼದೀಪ ಪೂಜೆʼ ಸಂಪನ್ನಗೊಂಡಿತು.