ಬಂಟ್ವಾಳ: ಮಗಳ ಚಿಕಿತ್ಸೆಗೆ ಹಣ ಹೊಂದಿಸಲು ಆಗದ ಕಾರಣ ಕೂಲಿ ಕಾರ್ಮಿಕನೊಬ್ಬ ಮನೆಯ ಪಕ್ಕದ ಗುಡ್ಡೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಟ್ವಾಳದ ಶಂಭೂರು ಗ್ರಾಮದ ಮಜಿಬೈಲಿನಲ್ಲಿ ನಡೆದಿದೆ.
ಬಂಟ್ವಾಳ: ಮಗಳ ಚಿಕಿತ್ಸೆಗೆ ಹಣ ಹೊಂದಿಸಲು ಆಗದ ಕಾರಣ ಕೂಲಿ ಕಾರ್ಮಿಕನೊಬ್ಬ ಮನೆಯ ಪಕ್ಕದ ಗುಡ್ಡೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಟ್ವಾಳದ ಶಂಭೂರು ಗ್ರಾಮದ ಮಜಿಬೈಲಿನಲ್ಲಿ ನಡೆದಿದೆ. ಕೃಷ್ಣಪ್ಪ ಮೂಲ್ಯ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಎನ್ನಲಾಗಿದೆ.
ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ ಕೃಷ್ಣಪ್ಪ ಅವರ ಪತ್ನಿ ಯೋಗಿನಿ ಅವರು ತನ್ನ ತಾಯಿ ಮನೆ ಬೇಂಕ್ಯದಲ್ಲಿ ವಾಸವಾಗಿದ್ದರು. ಆಗ ಅವರ 2ನೇ ಮಗಳು ಅನಾರೋಗ್ಯದಿಂದ ಬಳಲುತಿದ್ದರು. ಆದರೆ ಮಗಳ ಚಿಕಿತ್ಸೆಗೆ ಹಣವಿಲ್ಲವೆಂದು ಕೃಷ್ಣಪ್ಪ ಅವರು ಮನನೊಂದಿದ್ದರು. ಆದರೆ ಅವರು ಸುರತ್ಕಲ್ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಮೇ 16ರಂದು ಪತ್ನಿಯ ತಾಯಿ ಮನೆಗೆ ತೆರಳಿ ಮರುದಿನ ಸುರತ್ಕಲ್ಗೆ ಹೋಗುವುದಾಗಿ ಹೇಳಿದ್ದರು. ಆದರೆ ಅವರು ನೇರವಾಗಿ ಶಂಭೂರಿಗೆ ತೆರಳಿ ಮನೆಯ ಪಕ್ಕದ ಗುಡ್ಡದಲ್ಲಿ ನೇಣು ಬಿಗಿದುಕೊಂಡು ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.