Friday, December 1, 2023

ಬೆಂಗಳೂರು ರಾಜ – ಮಹಾರಾಜ ಜೋಡುಕರೆ ಕಂಬಳ ಕೂಟದ ಫಲಿತಾಂಶ

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 07 ಜೊತೆ ಅಡ್ಡಹಲಗೆ: 06 ಜೊತೆ ಹಗ್ಗ ಹಿರಿಯ: 21 ಜೊತೆ ನೇಗಿಲು ಹಿರಿಯ: 32 ಜೊತೆ ಹಗ್ಗ ಕಿರಿಯ: 31...
More

    Latest Posts

    ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ ಕನಕ ಜಯಂತಿ ಆಚರಣೆ

    ಉಡುಪಿ: ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ ಭಕ್ತ ಕನಕದಾಸರ ಕನಕ ಜಯಂತಿ ಆಚರಣೆ ಕಾರ್ಯಕ್ರಮ ದಿನಾಂಕ 30-11-2023ರಂದು ಸಂಜೆ 4.30ಕ್ಕೆ ಸರಿಯಾಗಿ ಎಂ.ಜಿ.ಎಂ ಕಾಲೇಜು ಬಳಿಯಿರುವ ತುಳುನಾಡ...

    ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯ ಇಲಾಖೆ ನೌಕರ

    ಕುಂದಾಪುರ: ಅರಣ್ಯ ಇಲಾಖೆ ವಶದಲ್ಲಿದ್ದ ವಾಹನ ಬಿಡುಗಡೆಗೆ ಲಂಚ ಸ್ವೀಕರಿಸುತ್ತಿದ್ದ  ಕುಂದಾಪುರ ಅರಣ್ಯ ಇಲಾಖೆಯ ನೌಕರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಕ್ಷೇಮಾಭಿವೃದ್ಧಿ ನೌಕರ...

    ಡಿ.1 ರಂದು “ರಾಪಟ” ತುಳು ಸಿನೆಮಾ ಬಿಡುಗಡೆ

    ಬೊಳ್ಳಿ ಮೂವೀಸ್ ಹಾಗೂ ಅವಿಕಾ ಪ್ರೊಡಕ್ಷನ್ಸ್ ನಿರ್ಮಾಣದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ,ಸಂಭಾಷಣೆ, ಸಾಹಿತ್ಯ ಬರೆದು, ಅರ್ಜುನ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ಸಿನಿಮಾ ರಾಪಟ ಡಿ.1...

    ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆಯ ಗುಮಾಸ್ತ ಲೋಕಾಯುಕ್ತ ಬಲೆಗೆ

    ಕುಂದಾಪುರ : ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆಯ ಗುಮಾಸ್ತರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಗುಮಾಸ್ತ ಬಿ.ಮಂಜುನಾಥ್ ಪೂಜಾರಿ ಲೋಕಾಯಕ್ತ...

    ಪತ್ನಿಯ ನೆನಪಿಗೆ ಶೋಭಾವನ ನಿರ್ಮಾಣ; ಔಷಧೀಯ ಗಿಡಗಳ ರಕ್ಷಣೆ, ಅಧ್ಯಯನಕ್ಕೆ ಅನುಕೂಲ

    ಮಂಗಳೂರು: ಪತ್ನಿಯ ಮೇಲಿನ ಅಗಾಧ ಪ್ರೀತಿ ಮತ್ತು ಆಕೆಯ ಸ್ಮರಣಾರ್ಥ ಷಹಜಾಹನ್ ತಾಜ್‌ಮಹಲ್ ಕಟ್ಟಿದ್ದು ಇತಿಹಾಸ. ಇದೇ ರೀತಿ ಪ್ರೀತಿಯ ಪತ್ನಿಯ ನೆನಪಿಗಾಗಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಮೋಹನ್ ಆಳ್ವ ಅವರು ಔಷಧೀಯ ಗಿಡಗಳ ಕಾಡನ್ನೇ ಕಟ್ಟಿದ್ದಾರೆ.

    ಡಾ.ಮೋಹನ್ ಆಳ್ವರ ಪತ್ನಿ ಶೋಭಾ ಅವರು ಗತಿಸಿದ ಬಳಿಕ ಅವರ ನೆನಪಿಗಾಗಿ ಮೂಡಬಿದಿರೆಯ ಮಿಜಾರ್​ನಲ್ಲಿ ಸುಮಾರು 5 ಎಕರೆ ಜಾಗದಲ್ಲಿ 1998-99ರಲ್ಲಿ ಶೋಭಾವನ ನಿರ್ಮಿಸಲಾಗಿದೆ. ಸುಂದರ ವನದ ಒಳಹೊಕ್ಕರೆ ಹಸಿರ ಸಿರಿಗಳು ಕಣ್ಮನ ಸೆಳೆಯುತ್ತವೆ. ಇಲ್ಲಿ ಕೇವಲ ಮರಗಿಡಗಳು ಮಾತ್ರವಲ್ಲ, ಇಲ್ಲಿರುವುದೆಲ್ಲವೂ ಔಷಧೀಯ ಗಿಡಮರಗಳು ಎಂಬುದು ಗಮನಾರ್ಹ. 

    ಬೆಂಕಿ ತಗುಲಿದರೆ ಚಿಕಿತ್ಸೆಗೆ ಬಳಸುವ ಪುತ್ರಂಜೀವ, ತಲೆನೋವು ಕಾಣಿಸಿಕೊಂಡರೆ ಅದಕ್ಕೆ ಬಳಸುವ ರಕ್ತ ಚಂದನ, ವಾತ, ಕಫಗಳ ಚಿಕಿತ್ಸೆಗೆ ಬಳಸುವ ನೀಲಗಿರಿ, ರಕ್ತ ಹೀನತೆ ಚಿಕಿತ್ಸೆಗೆ ಬೇಕಿರುವ ಅಗ್ನಿಮಂಥ, ಕುಷ್ಠರೋಗ ಚಿಕಿತ್ಸೆಗೆ ಬಳಸುವ ನಾಗಕೇಸರ, ಸಂಧಿವಾತಕ್ಕೆ ಬಳಸುವ ಸುರಪುನ್ನಾಗ, ಎಣ್ಣೆ ಹೊನ್ನೆ, ಹಲ್ಲಿನ ನೋವಿನ ಚಿಕಿತ್ಸೆಗೆ ಬಳಸುವ ರೆಂಜೆ, ಅಸ್ತಮಕ್ಕೆ ಬಳಸುವ ತಾರೆ, ಜಾಂಡೀಸ್​ಗೆ ಬಳಸುವ ಅಳಲೆ, ಡಯಾಬಿಟಿಸ್​ಗೆ ಬಳಸುವ ನೇರಳೆ, ವಿಷ ತೆಗೆಯಲು ಬಳಸುವ ಕದಂಬ ಮೊದಲಾದ ಅಪರೂಪದ ಸಸ್ಯಲೋಕವನ್ನು ಇಲ್ಲಿ ನೋಡಬಹುದು.

    ಶೋಭವನದಲ್ಲಿ 1,200 ವಿವಿಧ ಪಂಗಡಗಳ ಮರಗಿಡಗಳಿವೆ. ರುದ್ರಾಕ್ಷಿ, ಕಾಡು ರುದ್ರಾಕ್ಷಿ, ಬದ್ರಾಕ್ಷಿ, ತ್ರಿಫಲ, ನಾಗಕೇಸರ, ಜ್ಯೋತಿಷ್ಪತಿ, ಅಂಕೋಲೆ, ಸುರುಗಿ, ಪುತ್ರಂಜೀವ, ಬಳ್ಳತಾಕ, ಸಮುದ್ರಫಲ, ಕದಂಬ, ನಾಗರಿಂಗ, ಪುಷ್ಪ ಅರ್ಜುನ ಹೀಗೆ ಪಶ್ಚಿಮ ಘಟ್ಟದಲ್ಲಿರುವ ಗಿಡಮರಗಳಿವೆ. ಈ ಶೋಭಾವನವನ್ನು ಪಶ್ಚಿಮ ಘಟ್ಟದ ಗಿಡಮರಗಳಂತೆ ಬೆಳೆಸಲಾಗಿದೆ. 

    ರಾಶಿವನ, ನವಗ್ರಹ ವನ, ಗಣೇಶ ಪೂಜಾ ವನ, ಪಂಚಭೂತ ವನ, ಸತ್ಯನಾರಾಯಣ ಪೂಜಾವನ, ಅಷ್ಟದಿಕ್ಪಾಲಕ ವನ, ಕದಂಬ ವನ, ಶನಿಪೂಜಾ ವನ, ಭೂತಾರಾಧನೆಯ ವನಗಳನ್ನು ವಾಸ್ತುಬದ್ದವಾಗಿ ಮಾಡಲಾಗಿದೆ. ಈ ವನಗಳನ್ನು ಪುರಾತನ ಕಾಲದಲ್ಲಿ ಋಷಿ ಮುನಿಗಳು, ಪುರಾಣ ಪುರುಷರು ಮಂಡಿಸಿದ ಸಿದ್ಧಾಂತದ ರೀತಿಯಲ್ಲಿಯೇ ನಿರ್ಮಿಸಲಾಗಿದೆ. 

    ಉದಾಹರಣೆಗೆ, ಸತ್ಯನಾರಾಯಣ ಪೂಜೆಗೆ ಬಳಸುವ ವಿವಿಧ ಬಗೆಯ ಹೂವುಗಳನ್ನು ಸತ್ಯನಾರಾಯಣ ಪೂಜಾ ವನದಲ್ಲಿ ಕ್ರಮಬದ್ದವಾಗಿ ಬೆಳೆಸಲಾಗುತ್ತಿದೆ. ಅಷ್ಟದಿಕ್ಪಾಲಕ ವನದಲ್ಲಿ ವಾಸ್ತುಪ್ರಕಾರ ಗಿಡಮರಗಳನ್ನು ನೆಡಲಾಗಿದೆ. ಈ ವನದಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸುವುದಿಲ್ಲ. ಗೋಮೂತ್ರ, ಸಗಣಿ ಮತ್ತು ಕಹಿ ಬೇವಿನ ಹಿಂಡಿ ಮಾತ್ರ ಉಪಯೋಗಿಸಲಾಗುತ್ತಿದೆ. ಇದರಿಂದ ಗಿಡಮರಗಳು ಸಂಭಾವ್ಯ ರೋಗಗಳಿಂದ ಪಾರಾಗುತ್ತವೆ. 

    ಈ ಬಗ್ಗೆ ಮಾತನಾಡಿದ ಶೋಭಾವನ ಮೇಲ್ವಿಚಾರಕ ಮುತ್ತಪ್ಪ, “ಶೋಭಾವನ ಹರ್ಬಲ್ ಗಾರ್ಡನ್ ಎಂಬುದು ಔಷಧೀಯ ಸಸ್ಯವನ. ಡಾ.ಮೋಹನ್ ಆಳ್ವ ಅವರ ಪತ್ನಿ 1998ರಲ್ಲಿ ನಿಧನ ಹೊಂದಿದ್ದು, ಅವರ ನೆನಪಿಗಾಗಿ ನಿರ್ಮಾಣ ಮಾಡಿದ್ದಾರೆ. ಪಶ್ಚಿಮ ಘಟ್ಟದಲ್ಲಿರುವ ಸಸ್ಯ ಸಂಪತ್ತನ್ನು ಇಲ್ಲಿ ಬೆಳೆಸಲಾಗಿದೆ. ಸಸ್ಯ, ಬಳ್ಳಿಗಳಿಲ್ಲಿದೆ. ವಿಶೇಷವಾಗಿ, ಆಧ್ಯಾತ್ಮಿಕ ವನಗಳನ್ನು ನಿರ್ಮಾಣ ಮಾಡಲಾಗಿದೆ. ಇಂತಹ ವನಗಳು ಬೇರೆ ಕಡೆ ನೋಡಲು ಸಿಗುವುದೇ ವಿರಳ. ನೋಡಲು ಬೇರೆ ಬೇರೆ ಪ್ರದೇಶಗಳಿಂದ ಆಯುರ್ವೇದ ಕಲಿಯುವ ಮಕ್ಕಳು ಬರುತ್ತಾರೆ. ಎಲ್ಲವೂ ಉಚಿತವಾಗಿ ಅಧ್ಯಯನ ಮಾಡುವ ವ್ಯವಸ್ಥೆ. ಈಗಿನ ಜನರಿಗೆ ನಮ್ಮ ಮೂಲ ಸಂಸ್ಕೃತಿಯನ್ನು ತೋರಿಸಲು ಡಾ.ಮೋಹನ್ ಆಳ್ವರು ವ್ಯವಸ್ಥೆ ಮಾಡಿದ್ದಾರೆ” ಎಂದರು.

    ಶೋಭಾವನದಲ್ಲಿ ಪಕ್ಷಿ ವನವಿದೆ. ಇದರಲ್ಲಿ 160 ಪಂಗಡಗಳ ಗಿಡಗಳಿವೆ. 40 ಜಾತಿಯ ಪಕ್ಷಿಗಳು ವಾಸ ಮಾಡುತ್ತಿವೆ. ಚಿಟ್ಟೆವನದಲ್ಲಿ 60 ಜಾತಿಯ ಗಿಡಗಳಿದ್ದು 30 ಜಾತಿಯ ಚಿಟ್ಟೆಗಳಿವೆ.

    Latest Posts

    ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ ಕನಕ ಜಯಂತಿ ಆಚರಣೆ

    ಉಡುಪಿ: ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ ಭಕ್ತ ಕನಕದಾಸರ ಕನಕ ಜಯಂತಿ ಆಚರಣೆ ಕಾರ್ಯಕ್ರಮ ದಿನಾಂಕ 30-11-2023ರಂದು ಸಂಜೆ 4.30ಕ್ಕೆ ಸರಿಯಾಗಿ ಎಂ.ಜಿ.ಎಂ ಕಾಲೇಜು ಬಳಿಯಿರುವ ತುಳುನಾಡ...

    ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯ ಇಲಾಖೆ ನೌಕರ

    ಕುಂದಾಪುರ: ಅರಣ್ಯ ಇಲಾಖೆ ವಶದಲ್ಲಿದ್ದ ವಾಹನ ಬಿಡುಗಡೆಗೆ ಲಂಚ ಸ್ವೀಕರಿಸುತ್ತಿದ್ದ  ಕುಂದಾಪುರ ಅರಣ್ಯ ಇಲಾಖೆಯ ನೌಕರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಕ್ಷೇಮಾಭಿವೃದ್ಧಿ ನೌಕರ...

    ಡಿ.1 ರಂದು “ರಾಪಟ” ತುಳು ಸಿನೆಮಾ ಬಿಡುಗಡೆ

    ಬೊಳ್ಳಿ ಮೂವೀಸ್ ಹಾಗೂ ಅವಿಕಾ ಪ್ರೊಡಕ್ಷನ್ಸ್ ನಿರ್ಮಾಣದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ,ಸಂಭಾಷಣೆ, ಸಾಹಿತ್ಯ ಬರೆದು, ಅರ್ಜುನ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ಸಿನಿಮಾ ರಾಪಟ ಡಿ.1...

    ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆಯ ಗುಮಾಸ್ತ ಲೋಕಾಯುಕ್ತ ಬಲೆಗೆ

    ಕುಂದಾಪುರ : ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆಯ ಗುಮಾಸ್ತರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಗುಮಾಸ್ತ ಬಿ.ಮಂಜುನಾಥ್ ಪೂಜಾರಿ ಲೋಕಾಯಕ್ತ...

    Don't Miss

    ಮಂಗಳೂರು: ಅರ್ಧದಲ್ಲಿಯೆ ಸ್ಥಗಿತಗೊಂಡ ಅಪಾರ್ಟ್ಮೆಂಟ್ ಲಿಫ್ಟ್ – ಅಗ್ನಿಶಾಮಕ ದಳದಿಂದ ಐವರ ರಕ್ಷಣೆ

    ಮಂಗಳೂರು: ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ಲಿಫ್ಟ್ ಕೆಟ್ಟು ಅರ್ಧದಲ್ಲಿಯೆ ಸ್ಥಗಿತಗೊಂಡಿದ್ದು, ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಐವರನ್ನು ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ. ನಗರದ ಬೆಂದೂರಿನಲ್ಲಿರುವ ಶಿಲ್ಪಾ ಪ್ಯಾಲೇಸ್ ಎಂಬ ಅಪಾರ್ಟ್ಮೆಂಟ್...

    ಮಂಗಳೂರು : ಮರಣ ಪ್ರಮಾಣ ದೃಢೀಕರಣಕ್ಕೆ 13 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ವಿಎ

    ಮಂಗಳೂರು : ಅಜ್ಜನ ಮರಣ ಪ್ರಮಾಣ ಪತ್ರದ ದೃಢೀಕರಣಕ್ಕೆ 13 ಸಾವಿರ ಲಂಚ ಕೇಳಿದ ಚೇಳ್ಯಾರು ಗ್ರಾಮದ ವಿಎ ಶ್ರೀ ವಿಜಿತ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಕೈಗೆ...

    ಮಂಗಳೂರು: ಎಮ್ಮೆಕೆರೆ ಕ್ರೀಡಾಂಗಣದ ಅಭಿವೃದ್ಧಿಗೆ ಶಂಕು ಸ್ಥಾಪನೆ

    ಮಂಗಳೂರು: ಎಮ್ಮೆಕೆರೆ ಕ್ರೀಡಾಂಗಣದ ಅಭಿವೃದ್ಧಿಗೆ ಶಂಕು ಸ್ಥಾಪನೆ ಬೆಳಗ್ಗೆ 11 ಗಂಟೆಗೆ ಎಮ್ಮೆಕೆರೆ ಮೈದಾನದಲ್ಲಿ ಜನ ಪ್ರತಿನಿಧಿಗಳ ಉಪಸ್ಥಿತಿಯೊಂದಿಗೆ ನಡೆದಿದೆ.

    ಬೆಳ್ತಂಗಡಿ: ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ – ಸವಾರ ಸಾವು

    ಬೆಳ್ತಂಗಡಿ: ಬೈಕ್ ನ ಸೈಡ್ ಸ್ಟ್ಯಾಂಡ್ ತೆಗೆಯದೆ ಬೈಕ್ ಚಲಾಯಿಸಿದ ಪರಿಣಾಮ ಬೈಕ್ ನಿಯಂತ್ರಣ ಡಿವೈಡರ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನಪ್ಪಿದ ಘಟನೆ ಬೆಳ್ತಂಗಡಿಯ ಉಜಿರೆಯಲ್ಲಿ ನಡೆದಿದ್ದು,...

    ಯಕ್ಷಾಂಗಣ ಸಪ್ತಾಹದಲ್ಲಿ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸಂಸ್ಮರಣೆ

    ಮಂಗಳೂರು: 'ಸಾಧನ ಶೀಲ ಕಲಾವಿದರ ಹೆಸರಿನೊಂದಿಗೆ ಅವರ ಮನೆತನದ ಅಥವಾ ಊರಿನ ಹೆಸರು ಸೇರಿಕೊಂಡಿರುತ್ತದೆ. ಇದು ಅಂಥವರ ಸಮಗ್ರ ಕುಟುಂಬಕ್ಕೆ ಸಲ್ಲುವ ಗೌರವ. ಬೆಟ್ಟಂಪಾಡಿ ಬಾಳಪ್ಪ ಶೆಟ್ಟರು ಈ ನಿಟ್ಟಿನಲ್ಲಿ...