Monday, May 29, 2023

ಮಂಗಳೂರು: ದುಬೈಗೆ ಹೊರಟ್ಟಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ, ಟೇಕಾಫ್ ಕ್ಯಾನ್ಸಲ್.!

ಮಂಗಳೂರು: ಇನ್ನೇನು ಟೇಕಾಫ್ ಆಗಬೇಕಿದ್ದ ವಿಮಾನಕ್ಕೆ ಹಕ್ಕಿಯೊಂದು ಢಿಕ್ಕಿ ಹೊಡೆದ ಪರಿಣಾಮ ಟೇಕಾಫ್ ಕ್ಯಾನ್ಸಲ್ ಆದ ಘಟನೆ ಇಂದು ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.ಇಂಡಿಗೋ ವಿಮಾನವು ಇಂದು ಬೆಳಗ್ಗೆ...
More

    Latest Posts

    ಮಂಗಳೂರು: ವಿಮಾನ ನಿಲ್ದಾಣದಲ್ಲಿ 1.69 ಕೋಟಿ ಮೌಲ್ಯದ ವಜ್ರ ವಶಕ್ಕೆ

    ಮಂಗಳೂರು : ಅಕ್ರಮ ಚಿನ್ನ ಸಾಗಾಟ ಹೆಚ್ಚಾಗಿ ನಡೆಯುತ್ತಿದ್ದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಕೋಟ್ಯಾಂತರ ಮೌಲ್ಯದ ವಜ್ರವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ ಘಟನೆ ನಡೆದಿದ್ದು, ಪ್ರಯಾಣಿಕನೊಬ್ಬನಿಂದ 1.69...

    ಮಣ್ಣಿನ ಪಾತ್ರೆಯಲ್ಲಿ ‘ಮೊಸರು’ ಸಂಗ್ರಹಿಸೋದು ಎಷ್ಟೆಲ್ಲಾ ಪ್ರಯೋಜನಕಾರಿ ಗೊತ್ತಾ.?

    ಮೊಸರು ತಿನ್ನದೆ ಊಟ ಪೂರ್ಣವಾಗುವುದಿಲ್ಲ. ಅದಕ್ಕಾಗಿಯೇ ಬಹುತೇಕ ಎಲ್ಲಾ ಮನೆಗಳಲ್ಲಿ ಮೊಸರು ಇರಬೇಕು. ಅಲ್ಲದೆ, ಮೊಸರು ಅನೇಕ ಆರೋಗ್ಯ ಪ್ರಯೋಜನಗಳನ್ನ ಹೊಂದಿದ್ದು, ರುಚಿಯೂ ಅದ್ಭುತವಾಗಿರುತ್ತೆ. ಬೇಸಿಗೆಯಲ್ಲಿ ಮೊಸರು ಆರೋಗ್ಯಕ್ಕೆ ಬಹಳ...

    ಕುಂದಾಪುರ: ಏಳನೇ ತರಗತಿ ವಿದ್ಯಾರ್ಥಿನಿ ನೇಣಿಗೆ ಶರಣು

    ಕುಂದಾಪುರ: ಬಿಲ್ಲಾಡಿ ಗ್ರಾಮದ ಬನ್ನೇರಳಕಟ್ಟೆ ಎಂಬಲ್ಲಿ ಏಳನೇ ತರಗತಿ ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇ 26ರಂದು ನಡೆದಿದೆ. ಬನ್ನೇರಳಕಟ್ಟೆ ನಿವಾಸಿ ಕೃಷ್ಣ ಎಂಬವರ ಪುತ್ರಿ ಹದಿಮೂರು ವರ್ಷದ ಪ್ರಿಯಾ...

    ನೂತನ ಸಂಸತ್ ಭವನದ ಉದ್ಘಾಟನೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಭಾರತ – ಗಮನ ಸೆಳೆದ ಸರ್ವಧರ್ಮೀಯರ ಸಮ್ಮಿಲನ

    ನವದೆಹಲಿ : ನೂತನ ಸಂಸತ್ ಭವನ ಉದ್ಘಾಟನಾ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನಾಮಫಲಕವನ್ನು ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಸರ್ವಧರ್ಮೀಯರ ಸಮ್ಮಿಲನವು ವಿಶೇಷವಾಗಿ ಗಮನ ಸೆಳೆಯಿತು. ಹೌದು, ನೂತನ ಸಂಸತ್ ಭವನ ಉದ್ಘಾಟನಾ...

    ಮಂಗಳೂರು: ಬಿ. ಕೆ. ಹರಿಪ್ರಸಾದ್ ಮತ್ತು ಯು. ಟಿ. ಖಾದರ್‌ರಿಗೆ ಅಭಿನಂದನಾ ಸಮಾರಂಭ

    ಮಂಗಳೂರು: ಮಂಗಳೂರಿನ ಪುರಭವನದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಬಿ. ಕೆ. ಹರಿಪ್ರಸಾದ್ ಮತ್ತು ಕರ್ನಾಟಕ ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕರಾಗಿ ಆಯ್ಕೆಯಾಗಿರುವ ಮಾಜೀ ಮಂತ್ರಿ ಯು. ಟಿ. ಖಾದರ್ ಅವರಿಗೆ ಮೇ 19ರಂದು ಅಭಿನಂದನಾ ಸಮಾರಂಭ ನಡೆಯಿತು.

    ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‌ರಿಂದ ಕಾರ್ಯಕ್ರಮ ಉದ್ಘಾಟನೆ

    ಸಾಹುಲ್ ಹಮೀದ್ ಅವರು ಸ್ವಾಗತಿಸಿದರು ಹಾಗೂ ಶಶಿಧರ ಹೆಗ್ಡೆ ಅವರು ಎಲ್ಲರನ್ನೂ ಸ್ವಾಗತಿಸಿದರು.

    ನಿಷ್ಟುರವಾದಿ ರಾಜಕಾರಣಿಯಾದ ಹರಿಪ್ರಸಾದ್‌ರು ಕೋಮುವಾದಿ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಗಟ್ಟಿಯಾಗಿ ಹೇಳುವವರು. ಹರಿಪ್ರಸಾದರ ಬಗೆಗೆ ಭ್ರಷ್ಟಾಚಾರದ ಆರೋಪ ಇಲ್ಲ. ಹಾಗಾಗಿ ಧೈರ್ಯದಿಂದ ಬಿಜೆಪಿಯ ಭ್ರಷ್ಟಾಚಾರದ ಬಗೆಗೆ  ನೇರವಾಗಿ ಮಾತನಾಡುವ ಧೈರ್ಯಶಾಲಿ ಅವರು ಎಂದು ಉದ್ಘಾಟನಾ ಭಾಷಣದಲ್ಲಿ ಸಲೀಂ ಅಹಮದ್ ಅವರು ಹೇಳಿದರು.

    ಹಾಗೆಯೇ ಯು. ಟಿ. ಖಾದರ್ ಅವರು ಎಲ್ಲ ವರ್ಗದ ಜನರನ್ನು ಕಟ್ಟಿಕೊಂಡ ಜನಪರ ನಾಯಕ ಎಂದೂ ಅವರು ತಿಳಿಸಿದರು.

    ನಿಮ್ಮ ಮನೆಯ ದೇವರನ್ನೆಲ್ಲ ಚರಂಡಿಗೆಸೆಯಿರಿ ಎಂದು ದಲಿತರಿಗೆ ಕರೆ ಕೊಟ್ಟ, ಕನ್ನಡ ಸಾಹಿತ್ಯ ಬೂಸಾ ಎಂದ ಬಸವಲಿಂಗಪ್ಪನವರ ಜೊತೆ ನಿಂತವರು ಮತ್ತು ಉಡುಪಿ ಹೋಟೆಲ್‌ಗಳ ಮೇಲೆ ಮುಂಬಯಿಯಲ್ಲಿ ಶಿವಸೇನೆ ಹೊರಡಿ ಇಲ್ಲಿಂದ ಎಂದು ಹೇಳಿದಾಗ ಹಾಗೂ ದೇವರಾಜ ಅರಸು ಹೋರಾಟಗಳಲ್ಲಿ ಜೊತೆಗೆ ನಿಂತವರು ಹರಿಪ್ರಸಾದ್ ಎಂದು ಅಭಿನಂದನಾ ಭಾಷಣದಲ್ಲಿ ಹನುಮಂತಯ್ಯ ಹೇಳಿದರು. ಖಾದರ್ ಅವರು ನೋಡಿದರೆ ನೆಮ್ಮದಿಯ ಮನುಷ್ಯ ಎಂಬಂತೆ ಕಾಣಿಸುತ್ತಾರೆ. ಆದರೆ ಅವರನ್ನು ಮಾತನಾಡಿದರೆ ಅವರ ಒಳಗಿರುವ ಬಿಸಿ ಗೊತ್ತಾಗುತ್ತದೆ. ಸತ್ಯ ಅತಿರೇಕದ್ದಲ್ಲ ಎಂದು ಸಮಾಧಾನದಿಂದ ಉದ್ವೇಗವಿಲ್ಲದೆ ಮಾತನಾಡುವ ಸಮತೂಕದ ಚಿಂತನೆಯ ನಾಯಕ ಖಾದರ್ ಎಂದು ಹನುಮಂತಯ್ಯ ಹೇಳಿದರು. ಮಾಜೀ ಮಂತ್ರಿ ರಮಾನಾಥ ರೈ ಅವರು ಮಾತನಾಡಿ ಬಂಟ್ವಾಳದ ಅರಳದ ಹರಿಪ್ರಸಾದರು ರಾಜಕೀಯ ಶಕ್ತಿಯಾದುದು ಬೆಂಗಳೂರಿನಲ್ಲಿ. ನಮ್ಮ ಆರಂಭದ ರಾಜಕೀಯದಲ್ಲಿ ಅವರ ಕೊಡುಗೆಯೂ ಇದೆ. ಅಲ್ಪಸಂಖ್ಯಾತರ, ಹಿಂದುಳಿದವರ ಅವರ ಕಾಳಜಿ ಪ್ರಶ್ನಾತೀತ ಎಂದು ಹೇಳಿದರು. ಅಭಿನಂದನೆಗೆ ಒಳಗಾದ ಹರಿಪ್ರಸಾದರು ಮಾತನಾಡಿ ನನ್ನ ತಾಯಿ ಮನೆ ಉಲ್ಲಾಳ, ಇಲ್ಲಿನ ನೆಲದ ಅಬ್ಬಕ್ಕ ರಾಣಿಯ ಧೈರ್ಯ ನನ್ನಲ್ಲೂ ಸ್ವಲ್ಪ ಇದೆ. ನಮ್ಮ ತುಳುವರು ಎಷ್ಟೋ ಊರುಗಳಲ್ಲಿ ಪೊಕೋಡಾ ಚಾ ಮಾರಿದವರು. ಮೋದಿಯವರೆ ಅದನ್ನು ನಕಲು ಮಾಡಬೇಡಿ ಜನರಿಗೆ ಉದ್ಯೋಗ ನೀಡಿ. ನಮ್ಮ ಗುರಿ ಸಮಪಾಲು, ಸಹಬಾಳ್ವೆ, ಮೋದಿಯವರದು ಎಲ್ಲ ಹಿಂದೂ ಎನ್ನುತ್ತ ಪಾಲು ಪಾಲು. ಭಾರತದಲ್ಲಿ ಎಂಟು ಧರ್ಮಗಳ ವೈವಿಧ್ಯತೆ ಉಳಿಯಬೇಕು, ಬಲಿಯಬೇಕು ಎಂದರು. ಸಂಘ ಪರಿವಾರದವರ ಉದ್ದೇಶ ಹಿಜಬ್ ವಿರೋಧಿಸುವುದಲ್ಲ. ಆ ಮೂಲಕ ಹೆಣ್ಣು ಮಕ್ಕಳು ಓದಿ ಸಮಾಜದ ಅಭಿವೃದ್ಧಿ ತಡೆಯುವುದಾಗಿದೆ. ವಿದ್ಯಾವಂತರಾಗಿ, ಸಂಘಟಿತರಾಗಿ ಎಂದು ಹೇಳಿದವರು ನಾರಾಯಣ ಗುರುಗಳು. ಹಿಂದುಳಿದವರೆಲ್ಲ ಓದಿ ಒಗ್ಗೂಡಬಾರದು ಎನ್ನುವುದೇ ಬಿಜೆಪಿಯ ಗುರುಗಳ ವಿರುದ್ಧದ ಸಂಚು ಎಂದು ಸಹ ಹರಿಪ್ರಸಾದರು ಹೇಳಿದರು.

    ಯು. ಟಿ. ಖಾದರ್ ಅವರು ಮಾತನಾಡಿ ಪಕ್ಷ ಕಟ್ಟಿದ ಹಿರಿಯರು ತೋರಿದ ದಾರಿ ನನ್ನನ್ನು ಈ ಮಟ್ಟಕ್ಕೆ ಏರಿಸಿದೆ. ಉಲ್ಲಾಳದ ಕಾರ್ಯಕರ್ತರು, ಜನರು ಹಾಗೂ ಕಾಂಗ್ರೆಸ್ ಪಕ್ಷ ನನ್ನನ್ನು ಬೆಳೆಸಿದೆ. ಅಂಬೇಡ್ಕರ್ ಸಂವಿಧಾನ ಬದಿಗೊತ್ತಿ ಬಿಜೆಪಿ ಸರಕಾರಗಳು ನಿತ್ಯ ಅಲ್ಪಸಂಖ್ಯಾತರನ್ನು, ದಲಿತರನ್ನು ಭಯಕ್ಕೆ ತಳ್ಳಿ ಇಟ್ಟಿದೆ. ಸಂವಿಧಾನಕ್ಕೆ ಬದ್ಧವಾಗಿ ಕಾಂಗ್ರೆಸ್ ಪಕ್ಷವು ಜನರ ಭಯ ಹೋಗಲಾಡಿಸಲು ಹೋರಾಡುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕು. ಮೀಸಲಾತಿ ರದ್ದು ಪಡಿಸುವ ಹುನ್ನಾರ ಬಿಜೆಪಿಯದುಎಂದು ಹೇಳಿದರು.

    ದ. ಕ. ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜೀ ಶಾಸಕರಾದ ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ವಸಂತ ಬಂಗೇರ, ಜೆ. ಆರ್. ಲೋಬೋ, ಶಕುಂತಲಾ ಶೆಟ್ಟಿ, ಮೊಯಿದ್ದೀನ್ ಬಾವಾ, ಐವಾನ್ ಡಿಸೋಜಾ, ಅಲ್ಲದೆ ರಾಜಶೇಖರ ಕೋಟ್ಯಾನ್, ಪಿ. ವಿ. ಮೋಹನ್ ಮೊದಲಾದವರು ಉಪಸ್ಥಿತರಿದ್ದರು.

    Latest Posts

    ಮಂಗಳೂರು: ವಿಮಾನ ನಿಲ್ದಾಣದಲ್ಲಿ 1.69 ಕೋಟಿ ಮೌಲ್ಯದ ವಜ್ರ ವಶಕ್ಕೆ

    ಮಂಗಳೂರು : ಅಕ್ರಮ ಚಿನ್ನ ಸಾಗಾಟ ಹೆಚ್ಚಾಗಿ ನಡೆಯುತ್ತಿದ್ದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಕೋಟ್ಯಾಂತರ ಮೌಲ್ಯದ ವಜ್ರವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ ಘಟನೆ ನಡೆದಿದ್ದು, ಪ್ರಯಾಣಿಕನೊಬ್ಬನಿಂದ 1.69...

    ಮಣ್ಣಿನ ಪಾತ್ರೆಯಲ್ಲಿ ‘ಮೊಸರು’ ಸಂಗ್ರಹಿಸೋದು ಎಷ್ಟೆಲ್ಲಾ ಪ್ರಯೋಜನಕಾರಿ ಗೊತ್ತಾ.?

    ಮೊಸರು ತಿನ್ನದೆ ಊಟ ಪೂರ್ಣವಾಗುವುದಿಲ್ಲ. ಅದಕ್ಕಾಗಿಯೇ ಬಹುತೇಕ ಎಲ್ಲಾ ಮನೆಗಳಲ್ಲಿ ಮೊಸರು ಇರಬೇಕು. ಅಲ್ಲದೆ, ಮೊಸರು ಅನೇಕ ಆರೋಗ್ಯ ಪ್ರಯೋಜನಗಳನ್ನ ಹೊಂದಿದ್ದು, ರುಚಿಯೂ ಅದ್ಭುತವಾಗಿರುತ್ತೆ. ಬೇಸಿಗೆಯಲ್ಲಿ ಮೊಸರು ಆರೋಗ್ಯಕ್ಕೆ ಬಹಳ...

    ಕುಂದಾಪುರ: ಏಳನೇ ತರಗತಿ ವಿದ್ಯಾರ್ಥಿನಿ ನೇಣಿಗೆ ಶರಣು

    ಕುಂದಾಪುರ: ಬಿಲ್ಲಾಡಿ ಗ್ರಾಮದ ಬನ್ನೇರಳಕಟ್ಟೆ ಎಂಬಲ್ಲಿ ಏಳನೇ ತರಗತಿ ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇ 26ರಂದು ನಡೆದಿದೆ. ಬನ್ನೇರಳಕಟ್ಟೆ ನಿವಾಸಿ ಕೃಷ್ಣ ಎಂಬವರ ಪುತ್ರಿ ಹದಿಮೂರು ವರ್ಷದ ಪ್ರಿಯಾ...

    ನೂತನ ಸಂಸತ್ ಭವನದ ಉದ್ಘಾಟನೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಭಾರತ – ಗಮನ ಸೆಳೆದ ಸರ್ವಧರ್ಮೀಯರ ಸಮ್ಮಿಲನ

    ನವದೆಹಲಿ : ನೂತನ ಸಂಸತ್ ಭವನ ಉದ್ಘಾಟನಾ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನಾಮಫಲಕವನ್ನು ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಸರ್ವಧರ್ಮೀಯರ ಸಮ್ಮಿಲನವು ವಿಶೇಷವಾಗಿ ಗಮನ ಸೆಳೆಯಿತು. ಹೌದು, ನೂತನ ಸಂಸತ್ ಭವನ ಉದ್ಘಾಟನಾ...

    Don't Miss

    ಉಪ್ಪಿನಂಗಡಿ: ಕುಮಾರಧಾರ ನದಿಯ ಬಳಿ ವಿದ್ಯುತ್ ಶಾಕ್ ಹೊಡೆದು ವಿದ್ಯಾರ್ಥಿ ಸಾವು..!

    ಉಪ್ಪಿನಂಗಡಿ: ವಿದ್ಯುತ್ ಶಾಕ್ ಹೊಡೆದು ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಹಿರೇಬಂಡಾಡಿ ಗ್ರಾಮದ ಅಡಕ್ಕಲ್ ಕುಮಾರಧಾರ ನದಿಯ ಬಳಿ ನಡೆದಿದೆ. ಶರೀಪುದ್ದೀನ್(19) ಮೃತ ಯುವಕನಾಗಿದ್ದಾನೆ....

    ವಿಧಾನಸಭೆ ಸಭಾಧ್ಯಕ್ಷ ಸ್ಥಾನಕ್ಕೆ ಯು.ಟಿ ಖಾದರ್ ನಾಮಪತ್ರ ಸಲ್ಲಿಕೆ

    ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದಂತ ವಿಧಾನಸಭೆಯ ಸ್ಪೀಕರ್ ಚುನಾವಣೆಗಾಗಿ ( Karnataka Assembly Speaker Election ) ಇಂದು ಶಾಸಕ ಯು.ಟಿ ಖಾದರ್ ( MLA UT Khadar )...

    ಉಳ್ಳಾಲ ಠಾಣೆಯ ಕಾನ್ಸ್ ಟೇಬಲ್ ವಾಸುದೇವ ಚೌಹಾಣ್ ಅಮಾನತು

    ಉಳ್ಳಾಲ: ಉಳ್ಳಾಲ ಠಾಣೆಯಲ್ಲಿ ಸ್ಪೆಷಲ್ ಬ್ರಾಂಚ್ ಕಾನ್ಸ್ ಟೇಬಲ್ ಆಗಿದ್ದ ವಾಸುದೇವ ಚೌಹಾಣ್ ಅವರನ್ನು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಅಮಾನತು ಮಾಡಿದ್ದಾರೆ. ಇತ್ತೀಚೆಗೆ ತಲಪಾಡಿ...

    ಸುಳ್ಯ : ಬೈಕ್ ಅಪಘಾತ, ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

    ಸುಳ್ಯ ಸಮೀಪದ ಕಲ್ಚರ್ಪೆ – ಪಾಲಡ್ಕ ಬಳಿ ಬೈಕ್ ಅಪಘಾತ ಸಂಭವಿಸಿ ಬೈಕ್ ಸವಾರ ಕೆ.ವಿ.ಜಿ. ಆಯುರ್ವೇದ ಕಾಲೇಜಿನ ವಿದ್ಯಾರ್ಥಿ ಸ್ಥಳದಲ್ಲೆ ಮೃತಪಟ್ಟು ಸಹ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ...

    ರಾಜ್ಯ ವಿಧಾನಸಭೆಯ ನೂತನ ಸ್ಪೀಕರ್ ಹುದ್ದೆಗೆ ಅಚ್ಚರಿಯ ಆಯ್ಕೆಯಾದ ಮಾಜಿ ಸಚಿವ ಯು.ಟಿ ಖಾದರ್

    ಬೆಂಗಳೂರು: ರಾಜ್ಯ ವಿಧಾನಸಭೆಯ ನೂತನ ಸ್ಪೀಕರ್ ಹುದ್ದೆಗೆ ಅಚ್ಚರಿಯ ಆಯ್ಕೆಯಾಗಿ ಮಾಜಿ ಸಚಿವ ಯು ಟಿ ಖಾದರ್ ಅವರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ ಎಂದು ತಿಳಿದು ಬಂದಿದೆ.