Friday, March 29, 2024
spot_img
More

    Latest Posts

    ಮಂಗಳೂರು: ಹಿಜಾಬ್ ವಿಚಾರ – ಭಾರತ್ ಕಾಲೇಜಿಗೆ ಇಂದು ಕೂಡಾ ರಜೆ

    ಹಿಜಾಬ್ ವಿಚಾರವಾಗಿ ಮಂಗಳೂರು ನಗರದ ಹೊರವಲಯದ ಉಳ್ಳಾಲ ಭಾರತ್ ಪದವಿ ‌ಪೂರ್ವ ಕಾಲೇಜಿನಲ್ಲಿ ವಿವಾದ ಸೃಷ್ಟಿಯಾಗಿದ್ದರಿಂದ ಕಾಲೇಜಿಗೆ ಶುಕ್ರವಾರದಿಂದ ಘೋಷಿಸಿದ್ದ ರಜೆಯನ್ನು ಇಂದು ಕೂಡಾ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಕೂಡಾ ಪಿಯು ತರಗತಿಗಳು ನಡೆದಿಲ್ಲ. ಕಳೆದ ಗುರುವಾರದಿಂದ ಭಾರತ್ ಪ. ಪೂ. ಕಾಲೇಜಿನ ಹಿಜಾಬ್ ಧಾರಿಣಿ ವಿದ್ಯಾರ್ಥಿನಿಯರ ತರಗತಿಗೆ ಪ್ರವೇಶಿಸುವುದಕ್ಕೆ ಸರಕಾರದ ಆದೇಶ ಎಂಬ ಕಾರಣ ಮುಂದಿಟ್ಟು ಆಡಳಿತ ಸಮಿತಿ ನಿರ್ಬಂಧ ವಿಧಿಸಿದೆ. ಶುಕ್ರವಾರವೂ ಹಿಜಾಬ್ ಧರಿಸಿ ತರಗತಿಗೆ ಬರುವ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶಕ್ಕೆ ಅವಕಾಶ ನೀಡದ ಕಾರಣಕ್ಕೆ ಆಕ್ರೋಶ ಗೊಂಡ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಶಾಲೆಗೆ ಎರಡು ದಿನ ರಜೆ ಸಾರಲಾಗಿತ್ತು. ಈ ಬಗ್ಗೆ ಶಾಸಕ ಯು. ಟಿ. ಖಾದರ್ ನೇತೃತ್ವದಲ್ಲಿ ಸಭೆ ನಡೆದಿದ್ದರೂ ಸಮಸ್ಯೆ ಪರಿಹಾರ ಕಂಡಿಲ್ಲ. ಇಂದು ತರಗತಿ ಆರಂಭವಾಗಬೇಕಿದ್ದರೂ ಮಂಗಳವಾರ ಶಿವರಾತ್ರಿ ರಜೆ ಇರುವ ಕಾರಣ ಬುಧವಾರದಿಂದ ಸರಕಾರದ ನಿಯಮ ಪಾಲನೆಯೊಂದಿಗೆ ತರಗತಿ ಆರಂಭಗೊಳ್ಳಲಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss