ಮಂಗಳೂರು: ಪೆರಾರ ಮಹಾ ಸಂಸ್ಥಾನದಲ್ಲಿ ಸುದೀರ್ ಪ್ರಸಾದ್ ಶೆಟ್ಟಿ ಮಾರ್ಗದರ್ಶನದಲ್ಲಿ ಪ್ರತಿ ಆದಿತ್ಯವಾರದಂದು ಸಂಜೆ 5-30 ರಿಂದ 7-30 ರ ವರೆಗೆ ನಿರಂತರ 31ವಾರಗಳಿಂದ ಭಜನಾ ಕಾರ್ಯಕ್ರಮ ನಡೆಯುತ್ತಿದ್ದು, 32 ನೇ ವಾರದ ಭಜನಾ ಕಾರ್ಯಕ್ರಮವು ತುಳುನಾಡ ರಕ್ಷಣಾ ವೇದಿಕೆಯ ಮಹಿಳಾ ಘಟಕದ ವತಿಯಿಂದ ನಡೆಯಲಿದೆ.
ತುಳುನಾಡ ರಕ್ಷಣಾ ವೇದಿಕೆಯ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಬೇಕೆಂದು ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿಕಾ ಜೈನ್ ಹಾಗೂ ಕೇಂದ್ರೀಯ ಕಛೇರಿ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ವಿನಂತಿಸಿದ್ದಾರೆ.