ಬೆಂಗಳೂರು: ಪ್ರತಿಕೂಲ ಹವಾಮಾನ ಕಾರಣದಿಂದಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಬೇಕಿದ್ದ ವಿಮಾನ ವಾಪಸ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದೆ. ಗುರುವಾರ ಬೆಳಿಗ್ಗೆ 15 ನಿಮಿಷ ತಡವಾಗಿ ಬೆಂಗಳೂರಿನಿಂದ ತಡವಾಗಿ ಹೊರಟ ವಿಮಾನ 7 ಗಂಟೆ 10 ನಿಮಿಷಕ್ಕೆ ಮಂಗಳೂರು ತಲುಪಿತ್ತು.
ಆದರೆ ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನದ ಪರಿಸ್ಥಿತಿಯಿಂದಾಗಿ ವಿಮಾನ ಇಳಿಯಲು ಅನುಮತಿ ಸಿಗಲಿಲ್ಲ. ಆದ್ದರಿಂದ ಕೆಲ ಸಮಯ ಮಂಗಳೂರು ವಿಮಾನ ನಿಲ್ದಾಣದ ಸುತ್ತ ಹಾರಾಡಿ ಬಳಿಕ ಬೆಂಗಳೂರಿಗೆ ವಾಪಸ್ಸಾಯಿತು” ಎಂದು ಇಂಡಿಗೊ ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಮಾನದಲ್ಲಿ ಎಷ್ಟು ಜನ ಪ್ರಯಾಣಿಕರು ಇದ್ದರು ಎಂಬುದನ್ನು ಇಂಡಿಗೊ ಸಂಸ್ಥೆ ಬಹಿರಂಗಪಡಿಸಿಲ್ಲ.