ಬೆಳ್ತಂಗಡಿ: ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಮೂವರು ಗಂಭೀರ ಗಾಯಗೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ಇಂದು ಸಂಭವಿಸಿದೆ.
ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೊಯ್ಯರು ರಸ್ತೆಯ ಪೆಜಕ್ಕಳ ಎಂಬಲ್ಲಿ ಅಪಘಾತ ಸಂಭವಿಸಿದೆ.
ಕೊಯ್ಯರು ಗ್ರಾಮದ ಜೇಂಕಿನಡ್ಕ ಉಮೇಶ್ ಗೌಡ ಎಂಬವರ ಮಗಳು ಮತ್ತು ಮಗ ಮನೆಯಿಂದ
ದೇವಸ್ಥಾನಕ್ಕೆ ಹೋಗುತ್ತಿದವರು ಹಾಗು ಆನ್ ಲೈನ್ ಡೆಲಿವರಿ ಹುಡುಗ ಅಪಘಾತದಲ್ಲಿ ಗಂಭೀರ
ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
