ಮಂಗಳೂರು: ಅಕ್ರಮ ಸಾಗಾಟದ ಬರೋಬ್ಬರಿ 67ಲಕ್ಷ ರೂ. ದಾಖಲೆ ರಹಿತ ಹಣವನ್ನು ಕಾಸರಗೋಡಿನ ಕಲ್ಲೂರಾವಿಯಲ್ಲಿ ವಶಪಡಿಸಿಕೊಂಡ ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡವು ಓರ್ವನನ್ನು ಬಂಧಿಸಿದೆ. ಪುಂಜಾವಿ ನಿವಾಸಿ ಹ್ಯಾರಿಸ್ (39) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಡಿವೈಎಸ್ಪಿ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಕಲ್ಲೂರಾವಿಯಲ್ಲಿ ವಾಹನ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ಹ್ಯಾರಿಸ್ ಸ್ಕೂಟರನ್ನು ತಡೆದು ತಪಾಸಣೆ ನಡೆಸಿದಾಗ ಬರೋಬ್ಬರಿ 67 ಲಕ್ಷ ರೂ. ಹಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ
©2021 Tulunada Surya | Developed by CuriousLabs