ಮಂಗಳೂರು: ಸೈನಿಕನೆಂದು ನಂಬಿಸಿದ ಆರೋಪಿಯೋರ್ವ ಮಂಗಳೂರಿನ ವ್ಯಕ್ತಿಯೊಬ್ಬರಿಗೆ 51,300 ರೂ. ವಂಚಿಸಿರುವ ಬಗ್ಗೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶ್ರೀನಿವಾಸ್ ಎಂಬಾತ 23 ಸಾವಿರ ರೂ. ಬೆಲೆಗೆ ಹೋಂಡಾ ಡಿಯೋ ವಾಹನ ಮಾರಾಟಕ್ಕಿದೆ ಎಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜಾಹೀರಾತು ಹಾಕಿದ್ದ.
ನೋಡಿ ಮಂಗಳೂರಿನ ವ್ಯಕ್ತಿ ಆತನ ಜೊತೆಗೆ ಮಾತನಾಡಿ 18 ಸಾವಿರ ರೂ.ಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಶ್ರೀನಿವಾಸ್ ತಾನು ಸೈನಿಕ ಎಂದು ತಿಳಿಸಿ ಯೂನಿಫಾರ್ಮ್ನಲ್ಲಿದ್ದ ಫೋಟೋ ಮತ್ತು ಕಚೇರಿ ಎಂದು ಮತ್ತೊಂದು ಫೋಟೋವನ್ನು ಕಳುಹಿಸಿದ್ದ. ಅಲ್ಲದೆ ಮುಂಗಡ ಹಣ ಕಳುಹಿಸುವಂತೆ ತಿಳಿಸಿ ಮೊದಲು 3 ಸಾವಿರ ರೂ. ಪಡೆದು ಆರ್ಸಿ ವರ್ಗಾಯಿಸಲು ಆಧಾರ್ ಕಾರ್ಡ್ ಕೇಳಿದ್ದಾನೆ.
ಆದರೆ ಬಳಿಕ ಹಂತ ಹಂತವಾಗಿ 51,300 ರೂ. ಹಣ ಲಪಟಾಯಿಸಿದ್ದಾನೆ. ಇಷ್ಟಾದರೂ ದ್ವಿಚಕ್ರ ವಾಹನ ಸಿಗದೇ ಇರುವುದರಿಂದ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಹಣ ಕಳೆದುಕೊಂಡ ವ್ಯಕ್ತಿ ಪ್ರಕರಣ ದಾಖಲಿಸಿದ್ದಾರೆ.