Thursday, April 25, 2024
spot_img
More

    Latest Posts

    ಮನೆ ಕಟ್ಟಲು ತೆಗೆದ ಬುನಾದಿ ಗುಂಡಿಯಲ್ಲಿ ಈಜಲು ಹೋದ ಮೂವರು ಬಾಲಕರು ದುರ್ಮರಣ

    ಕಲಬುರಗಿ: ನೀರು ತುಂಬಿದ್ದ ಗುಂಡಿಯಲ್ಲಿ‌ ಈಜಾಡಲು ಹೋದ ಮೂವರು ಬಾಲಕರು ದುರ್ಮರಣ ಹೊಂದಿರುವ ಘಟನೆ ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ. ಮೃತರನ್ನು ದರ್ಶನ್ (12), ಪ್ರಶಾಂತ್​ (10) ಹಾಗು ವಿಘ್ನೇಶ್ (9) ಎಂದು ಗುರುತಿಸಲಾಗಿದೆ.

    ಮನೆ‌ ಕಟ್ಟುವುದಕ್ಕೆ ಕಾಲಮ್ ಹಾಕಿ ತಗ್ಗು ತೋಡಲಾಗಿದೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ತಗ್ಗುಗುಂಡಿ‌ ಜಲಾವೃತವಾಗಿತ್ತು. ಮಳೆನೀರು ತುಂಬಿದ ಗುಂಡಿಗೆ ಈ ಬಾಲಕರು ಇಳಿದಿದ್ದಾರೆ. ಈ ಸಂದರ್ಭದಲ್ಲಿ ದುರಂತ ಸಂಭವಿಸಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss