ಮಂಗಳೂರು: ರಾಜ್ಯದಲ್ಲಿ ನಿನ್ನೆ ರಾತ್ರಿ 10.ಗಂಟೆಯಿಂದ 2ನೇ ವಾರದ ವಾರಾಂತ್ಯ ಕರ್ಫ್ಯೂ ಆರಂಭವಾಗಿದ್ದು, ಸೋಮವಾರ ಬೆಳಗ್ಗೆ 5 ಗಂಟೇಯ ವರೆಗೆ ಈ ಕರ್ಫ್ಯೂ ಜಾರಿಯಲ್ಲಿ ಇರಲಿದೆ.
ಈ ಹಿನ್ನಲೆ ಮಂಗಳೂರು ನಗರದ ಸರ್ಕ್ಯೂಟ್ ಹೌಸ್,ನಂತೂರು,ವೆಲೆನ್ಸಿಯಾ ಮುಂತಾದ ಕಡೆಗಳಲ್ಲಿ ಶುಕ್ರವಾರ ರಾತ್ರಿ ಬ್ಯಾರಿಕೇಡ್ ಎಳೆದು ತೀವ್ರ ತಪಾಸಣೆ,ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಸ್ವತಃ ಫೀಲ್ಡಿಗಿಳಿದ ಡಿಸಿಪಿ ಹರಿರಾಂ ಶಂಕರ್ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಅನಗತ್ಯ ಓಡಾಡುವ ವಾಹನ ಸವಾರರಿಗೆ ಹಾಗೂ ಮಾಸ್ಕ್ ಹಾಕದವರಿಗೆ ದಂಡ ವಿಧಿಸುತ್ತಿದ್ದು, ಮತ್ತೆ ಮತ್ತೆ ನಿಯಮ ಮೀರಿದ್ರೆ ವಾಹನ ಸೀಝ್ ಮಾಡೋ ವಾರ್ನಿಂಗ್ ನೀಡಿದ್ದಾರೆ.