ಬೆಳ್ತಂಗಡಿ : ಬಿಳಿ ರಕ್ತಕಣಗಳ ಕಾಯಿಲೆಯಿಂದ ಬಳಲುತ್ತಿದ್ದ ಧರ್ಮಸ್ಥಳ ಗ್ರಾಮದ ಅಗುಳೆಬೈಲು ನಿವಾಸಿ ದಿನೇಶ್ ಮತ್ತು ಭಾರತಿ ದಂಪತಿಯ ಪುತ್ರಿ ದೃತಿ (6) ಸೋಮವಾರ ನಿಧನಳಾಗಿದ್ದಾಳೆ.
ಈ ಬಾಲಕಿಗೆ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯ ವೈದ್ಯರ ಮೂಲಕ ಚಿಕಿತ್ಸೆ ನಡೆಯುತ್ತಿತ್ತು. ಕೆಲವು ತಿಂಗಳುಗಳ ಹಿಂದೆ ಕಾಯಿಲೆ ಸಂಪೂರ್ಣವಾಗಿ ಗುಣವಾಗಲು ಬೆಂಗಳೂರಿನಲ್ಲಿ ಹೆಚ್ಚಿನ ಚಿಕಿತ್ಸೆ ನಡೆಯಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು.
ಸುಮಾರು 25 ಲಕ್ಷ ಖರ್ಚುಗಳಾಗಬಹುದು ಎಂದು ವೈದ್ಯರು ತಿಳಿಸಿದ್ದರಿಂದ ಬಡ ಕುಟುಂಬಕ್ಕೆ ಅಷ್ಟೊಂದು ಮೊತ್ತವನ್ನು ಹೊಂದಿಸಲು ಸಾಧ್ಯವಾಗದೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ನೆರವನ್ನು ಯಾಚಿಸಿದ್ದರು. ಹಲವು ದಾನಿಗಳು ಮತ್ತು ಸಂಘಸಂಸ್ಥೆಗಳು ನೆರವನ್ನು ನೀಡಿದ್ದರೂ ಬಾಲಕಿ ಬದುಕಿಳಿಯಲಿಲ್ಲ.